Kannada Translation - Hamza Buturಅವರು (ಪ್ರವಾದಿ) ಇದನ್ನು ಸ್ವಯಂ ರಚಿಸಿದ್ದಾರೆ ಎಂದು ಅವರು ಹೇಳುತ್ತಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಅವತೀರ್ಣವಾದ ಸತ್ಯವಾಗಿದೆ. ನಿಮಗಿಂತ ಮೊದಲು ಯಾವುದೇ ಮುನ್ನೆಚ್ಚರಿಕೆಗಾರರು ಬರದ ಈ ಜನರಿಗೆ ಎಚ್ಚರಿಕೆ ನೀಡಲೆಂದು. ಅವರು ಸನ್ಮಾರ್ಗವನ್ನು ಸ್ವೀಕರಿಸುವುದಕ್ಕಾಗಿ.
Kannada Translation - Hamza Buturಅಲ್ಲಾಹನೇ ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನ ಹೊರತು ನಿಮಗೆ ಬೇರೆ ರಕ್ಷಕರೋ, ಶಿಫಾರಸುಗಾರರೋ ಇಲ್ಲ. ಆದರೂ ನೀವು ಉಪದೇಶ ಪಡೆಯುವುದಿಲ್ಲವೇ?
Kannada Translation - Hamza Buturಅವನು ಆಕಾಶದಿಂದ ಭೂಮಿಯ ತನಕ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತಾನೆ. ನಂತರ ನಿಮ್ಮ ಎಣಿಕೆಯ ಪ್ರಕಾರ ಒಂದು ಸಾವಿರ ವರ್ಷಗಳಷ್ಟು ದೀರ್ಘವಾದ ಒಂದು ದಿನದಂದು ಆ ಕಾರ್ಯಗಳು ಅವನ ಬಳಿಗೆ ಏರಿಹೋಗುತ್ತವೆ.
Kannada Translation - Hamza Buturನಂತರ ಅವನಿಗೆ ಸರಿಯಾದ ರೂಪವನ್ನು ನೀಡಿ, ತನ್ನ ಕಡೆಯ ಆತ್ಮವನ್ನು ಊದಿದನು. ಅವನು ನಿಮಗೆ ಕೇಳುವ ಶಕ್ತಿಯನ್ನು, ನೋಡುವ ಶಕ್ತಿಯನ್ನು ಮತ್ತು ಹೃದಯವನ್ನು ನೀಡಿದನು. ನೀವು ಅಲ್ಪವೇ ಕೃತಜ್ಞರಾಗುತ್ತೀರಿ.
Kannada Translation - Hamza Buturಸತ್ಯನಿಷೇಧಿಗಳು ಹೇಳಿದರು: “ನಾವು ಭೂಮಿಯಲ್ಲಿ ವಿಲೀನವಾಗಿ ಕಣ್ಮರೆಯಾದ ಬಳಿಕ ನಮ್ಮನ್ನು ಹೊಸದಾಗಿ ಸೃಷ್ಟಿಸಲಾಗುವುದೇ?” ಅಲ್ಲ, ವಾಸ್ತವವಾಗಿ ಅವರು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವುದನ್ನು ನಿಷೇಧಿಸಿದ್ದಾರೆ.
Kannada Translation - Hamza Buturಹೇಳಿರಿ: “ನಿಮ್ಮ ಹೊಣೆ ವಹಿಸಿಕೊಡಲಾದ ಮರಣದ ದೂತರು ನಿಮ್ಮ ಆತ್ಮವನ್ನು ವಶಪಡಿಸುವರು. ನಂತರ ನಿಮ್ಮನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು.”
Kannada Translation - Hamza Buturಅಪರಾಧಿಗಳು ಅವರ ಪರಿಪಾಲಕನ (ಅಲ್ಲಾಹನ) ಮುಂದೆ ತಲೆತಗ್ಗಿಸಿ ನಿಂತು, “ನಮ್ಮ ಪರಿಪಾಲಕನೇ! ನಾವು ಕಣ್ಣಾರೆ ನೋಡಿದ್ದೇವೆ ಮತ್ತು ಕೇಳಿದ್ದೇವೆ. ಆದ್ದರಿಂದ ನಮ್ಮನ್ನು ಭೂಮಿಗೆ ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುತ್ತೇವೆ. ಖಂಡಿತವಾಗಿಯೂ ಈಗ ನಮಗೆ ದೃಢನಂಬಿಕೆ ಬಂದಿದೆ” ಎಂದು ಹೇಳುವ ದೃಶ್ಯವನ್ನು ನೀವು ನೋಡಿರುತ್ತಿದ್ದರೆ!
Kannada Translation - Hamza Buturನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ಸನ್ಮಾರ್ಗವನ್ನು ತೋರಿಸುತ್ತಿದ್ದೆವು. ಆದರೆ, ನಾನು ಜಿನ್ನ್ ಮತ್ತು ಮಾನವರಿಂದ ನರಕವನ್ನು ತುಂಬಿಸಿಯೇ ಬಿಡುತ್ತೇನೆ ಎಂಬ ನನ್ನ ವಚನವು ಖಾತ್ರಿಯಾಗಿದೆ.
Kannada Translation - Hamza Buturಆದ್ದರಿಂದ ನಿಮ್ಮ ಈ ದಿನದ ಭೇಟಿಯನ್ನು ನೀವು ಮರೆತಿರುವ ಕಾರಣದಿಂದ ಶಿಕ್ಷೆಯ ರುಚಿಯನ್ನು ನೋಡಿರಿ. ಇಂದು ನಾವು ನಿಮ್ಮನ್ನು ಮರೆತಿದ್ದೇವೆ. ನೀವು ಮಾಡುತ್ತಿದ್ದ ದುಷ್ಕರ್ಮಗಳ ಕಾರಣದಿಂದ ಶಾಶ್ವತ ಶಿಕ್ಷೆಯ ರುಚಿಯನ್ನು ನೋಡಿರಿ.
Kannada Translation - Hamza Buturನಮ್ಮ ದೃಷ್ಟಾಂತಗಳಲ್ಲಿ ವಿಶ್ವಾಸವಿಡುವವರು ಯಾರೆಂದರೆ, ಅವುಗಳ ಮೂಲಕ ಉಪದೇಶ ಮಾಡಲಾದರೆ ಸಾಷ್ಟಾಂಗ ಮಾಡುತ್ತಾ ಬೀಳುವವರು ಮತ್ತು ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಕೊಂಡಾಡುವವರು. ಅವರು ಅಹಂಕಾರ ಪಡುವುದಿಲ್ಲ.
Kannada Translation - Hamza Buturಅವರ ಪಾರ್ಶ್ವಗಳು ಅವರ ಹಾಸಿಗೆಗಳನ್ನು ಬಿಟ್ಟು ಬೇರ್ಪಡುತ್ತವೆ. ಅವರು ಭಯ ಮತ್ತು ನಿರೀಕ್ಷೆಯಿಂದ ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸುತ್ತಾರೆ. ನಾವು ಅವರಿಗೆ ಒದಗಿಸಿದ ಸಂಪತ್ತಿನಿಂದ ಅವರು ಖರ್ಚು ಮಾಡುತ್ತಾರೆ.
Kannada Translation - Hamza Buturಕಣ್ಣು ತಂಪಾಗಿಸುವ ಯಾವೆಲ್ಲಾ ವಸ್ತುಗಳನ್ನು ಅವರಿಗೋಸ್ಕರ ಗೋಪ್ಯವಾಗಿಡಲಾಗಿದೆ ಎಂದು ಯಾವುದೇ ವ್ಕಕ್ತಿಯೂ ತಿಳಿದಿಲ್ಲ. ಇದು ಅವರು ಮಾಡಿದ ಸತ್ಕರ್ಮಗಳ ಪ್ರತಿಫಲವಾಗಿದೆ.
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರಿಗೆ ಶಾಶ್ವತ ಸ್ವರ್ಗೋದ್ಯಾನಗಳಿವೆ. ಅವರು ಮಾಡಿದ ಸತ್ಕರ್ಮಗಳ ಫಲವಾಗಿ ಅವರಿಗೆ ಅಲ್ಲಿ ಆತಿಥ್ಯವಿದೆ.
Kannada Translation - Hamza Buturದುಷ್ಕರ್ಮವೆಸಗಿದವರು ಯಾರೋ ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅವರು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗಲೆಲ್ಲಾ ಅವರನ್ನು ಮತ್ತೆ ಅದಕ್ಕೇ ತಳ್ಳಲಾಗುವುದು. (ಅವರೊಡನೆ ಹೇಳಲಾಗುವುದು:) “ನೀವು ನಿಷೇಧಿಸುತ್ತಿದ್ದ ಆ ನರಕ ಶಿಕ್ಷೆಯ ರುಚಿಯನ್ನು ನೋಡಿರಿ.”
Kannada Translation - Hamza Buturಆ ಮಹಾ ಶಿಕ್ಷೆಗೆ ಮೊದಲು ನಾವು ಅವರಿಗೆ (ಇಹಲೋಕದಲ್ಲಿ) ಕೆಲವು ಸಣ್ಣ ಶಿಕ್ಷೆಗಳ ರುಚಿಯನ್ನು ತೋರಿಸುತ್ತೇವೆ. ಅವರು (ಪಶ್ಚಾತ್ತಾಪಪಟ್ಟು) ಮರಳಿ ಬರಲೆಂದು.
Kannada Translation - Hamza Buturತನ್ನ ಪರಿಪಾಲಕನ (ಅಲ್ಲಾಹನ) ವಚನಗಳ ಮೂಲಕ ಉಪದೇಶ ನೀಡಲಾದ ಬಳಿಕವೂ ಮುಖ ತಿರುಗಿಸಿ ನಡೆಯುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ನಾವು ಅಂತಹ ಅಪರಾಧಿಗಳಿಂದ ಪ್ರತೀಕಾರ ಪಡೆಯುವೆವು.
Kannada Translation - Hamza Buturನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೇವೆ. ಆದ್ದರಿಂದ ಅವರನ್ನು ಭೇಟಿಯಾಗುವ ವಿಷಯದಲ್ಲಿ ನಿಮಗೆ ಸಂಶಯವುಂಟಾಗದಿರಲಿ.[1] ನಾವು ಅದನ್ನು (ಗ್ರಂಥವನ್ನು) ಇಸ್ರಾಯೇಲ್ ಮಕ್ಕಳಿಗೆ ಮಾರ್ಗದರ್ಶಿಯಾಗಿ ಮಾಡಿದೆವು.
Kannada Translation - Hamza Buturಅವರು ತಾಳ್ಮೆಯಿಂದ ಜೀವಿಸಿದಾಗ ನಾವು ಅವರಲ್ಲಿ ಕೆಲವರನ್ನು ನಮ್ಮ ಆಜ್ಞೆಯ ಪ್ರಕಾರ ಜನರಿಗೆ ಸನ್ಮಾರ್ಗ ತೋರಿಸುವ ಮುಖಂಡರನ್ನಾಗಿ ಮಾಡಿದೆವು. ಅವರು ನಮ್ಮ ವಚನಗಳಲ್ಲಿ ದೃಢನಂಬಿಕೆಯುಳ್ಳವರಾಗಿದ್ದರು.
Kannada Translation - Hamza Buturನಾವು ಅವರಿಗಿಂತ ಮೊದಲು ಎಷ್ಟೆಷ್ಟು ತಲೆಮಾರುಗಳನ್ನು ನಾಶ ಮಾಡಿದ್ದೇವೆ ಎಂಬ ಸತ್ಯವು ಅವರಿಗೆ ಸನ್ಮಾರ್ಗವನ್ನು ತೋರಿಸಿಕೊಡಲಿಲ್ಲವೇ? ಅವರ ವಾಸಸ್ಥಳಗಳ ಮೂಲಕ ಇವರು ಸಾಗುತ್ತಿದ್ದಾರೆ! ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಾಂತಗಳಿವೆ. ಆದರೂ ಇವರು ಕಿವಿಗೊಡುವುದಿಲ್ಲವೇ?
Kannada Translation - Hamza Buturನಾವು ಬರಡು ಭೂಮಿಗೆ ನೀರು ಹರಿಸುವುದನ್ನು ಅವರು ನೋಡಿಲ್ಲವೇ? ನಂತರ ಅದರಿಂದ ನಾವು ಬೆಳೆಗಳನ್ನು ಹೊರತರುತ್ತೇವೆ. ಅದನ್ನು ಅವರ ಜಾನುವಾರುಗಳು ಮತ್ತು ಸ್ವತಃ ಅವರು ಕೂಡ ತಿನ್ನುತ್ತಾರೆ. ಆದರೂ ಅವರು ನೋಡುವುದಿಲ್ಲವೇ?
Kannada Translation - Hamza Buturಹೇಳಿರಿ: “ತೀರ್ಪು ಬರುವ ದಿನದಂದು ಸತ್ಯನಿಷೇಧಿಗಳು ವಿಶ್ವಾಸವನ್ನು ಸ್ವೀಕರಿಸಿದರೆ ಅದು ಅವರಿಗೆ ಪ್ರಯೋಜನಪಡುವುದಿಲ್ಲ. ಅವರಿಗೆ ಕಾಲಾವಕಾಶವನ್ನೂ ನೀಡಲಾಗುವುದಿಲ್ಲ.”