Kannada Translation - Hamza Buturಅಲಿಫ್ ಲಾಮ್ ರಾ. ಇದು ಗ್ರಂಥ. ನೀವು ಮನುಷ್ಯರನ್ನು ಅವರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಂತೆ ಅಂಧಕಾರಗಳಿಂದ ಬೆಳಕಿಗೆ—ಪ್ರಬಲನು ಮತ್ತು ಸ್ತುತ್ಯರ್ಹನಾದವನ ಮಾರ್ಗಕ್ಕೆ—ತರಲು ನಾವು ಇದನ್ನು ನಿಮಗೆ ಅವತೀರ್ಣಗೊಳಿಸಿದ್ದೇವೆ.
Kannada Translation - Hamza Buturಅವರು ಯಾರೆಂದರೆ, ಪರಲೋಕಕ್ಕಿಂತಲೂ ಇಹಲೋಕಕ್ಕೆ ಆದ್ಯತೆ ನೀಡುವವರು, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಗಟ್ಟುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಅತಿವಿದೂರದ ದುರ್ಮಾರ್ಗದಲ್ಲಿದ್ದಾರೆ.
Kannada Translation - Hamza Buturನಾವು ಎಲ್ಲಾ ಸಂದೇಶವಾಹಕರನ್ನೂ ಅವರ ಜನರ ಭಾಷೆಯಲ್ಲಿ (ಮಾತನಾಡುವಂತೆ) ಕಳುಹಿಸಿದ್ದೇವೆ. ಅವರು ಜನರಿಗೆ ಸಂದೇಶವನ್ನು ಸ್ಪಷ್ಟವಾಗಿ ವಿವರಿಸಿಕೊಡುವುದಕ್ಕಾಗಿ. ಅಲ್ಲಾಹು ಅವನು ಇಚ್ಛಿಸುವವರನ್ನು ದಾರಿತಪ್ಪಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಸನ್ಮಾರ್ಗವನ್ನು ತೋರಿಸುತ್ತಾನೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Butur“ನಿಮ್ಮ ಜನರನ್ನು ಅಂಧಕಾರಗಳಿಂದ ಬೆಳಕಿಗೆ ತನ್ನಿರಿ ಮತ್ತು ಅವರಿಗೆ ಅಲ್ಲಾಹನ ಉಪಕಾರಗಳನ್ನು ನೆನಪಿಸಿಕೊಡಿ” (ಎಂದು ಆದೇಶಿಸುತ್ತಾ) ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ನಿಶ್ಚಯವಾಗಿಯೂ, ಸೈರಣೆಯಿರುವ ಮತ್ತು ಕೃತಜ್ಞರಾದ ಪ್ರತಿಯೊಬ್ಬರಿಗೂ ಅದರಲ್ಲಿ ದೃಷ್ಟಾಂತಗಳಿವೆ.
Kannada Translation - Hamza Buturಮೂಸಾ ತಮ್ಮ ಜನರಿಗೆ ಹೇಳಿದ ಸಂದರ್ಭ: “(ಓ ಜನರೇ!) ನಿಮಗೆ ಕಠೋರ ಹಿಂಸೆ ನೀಡುತ್ತಿದ್ದ, ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದ ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಡುತ್ತಿದ್ದ ಫರೋಹನ ಜನರಿಂದ ಅಲ್ಲಾಹು ನಿಮ್ಮ ರಕ್ಷಿಸಿದ ಸಂದರ್ಭದಲ್ಲಿ ಅವನು ನಿಮಗೆ ಕರುಣಿಸಿದ ಅನುಗ್ರಹವನ್ನು ಸ್ಮರಿಸಿ. ಅದರಲ್ಲಿ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಮಹಾ ಪರೀಕ್ಷೆಯಿತ್ತು”.
Kannada Translation - Hamza Buturನಿಮ್ಮ ಪರಿಪಾಲಕನು (ಅಲ್ಲಾಹು) ಘೋಷಿಸಿದ ಸಂದರ್ಭ: “ನೀವು ಕೃತಜ್ಞರಾದರೆ ನಾನು ನಿಮಗೆ (ಅನುಗ್ರಹವನ್ನು) ಖಂಡಿತ ಹೆಚ್ಚಿಸುವೆನು. ಆದರೆ ನೀವು ಕೃತಘ್ನರಾದರೆ ನನ್ನ ಶಿಕ್ಷೆಯು ಅತಿಕಠೋರವಾಗಿದೆ.”
Kannada Translation - Hamza Buturಮೂಸಾ ಹೇಳಿದರು: “ನೀವು ಮತ್ತು ಭೂಮಿಯಲ್ಲಿರುವ ಮನುಷ್ಯರೆಲ್ಲರೂ ಒಟ್ಟಾಗಿ ಅಲ್ಲಾಹನನ್ನು ನಿಷೇಧಿಸಿದರೂ (ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ). ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.”
Kannada Translation - Hamza Buturನಿಮಗಿಂತ ಮೊದಲಿನ ನೂಹರ ಜನರು, ಆದ್ ಮತ್ತು ಸಮೂದ್ ಗೋತ್ರಗಳು ಹಾಗೂ ಅವರ ನಂತರ ಬಂದ—ಅಲ್ಲಾಹನ ಹೊರತು ಬೇರೆ ಯಾರೂ ತಿಳಿದಿರದ ಗೋತ್ರಗಳು—ಮುಂತಾದವರ ಸಮಾಚಾರಗಳು ನಿಮಗೆ ತಲುಪಿಲ್ಲವೇ? ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆಗ ಅವರು ತಮ್ಮ ಕೈಯನ್ನು ಬಾಯಿಗೆ ಒತ್ತಿ ಹಿಡಿದು ಹೇಳಿದರು: “ಯಾವ ಸಂದೇಶದೊಂದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ಅದನ್ನು ನಾವು ಸಂಪೂರ್ಣವಾಗಿ ನಿಷೇಧಿಸಿದ್ದೇವೆ. ನೀವು ನಮ್ಮನ್ನು ಯಾವ ಧರ್ಮದ ಕಡೆಗೆ ಕರೆಯುತ್ತಿದ್ದೀರೋ ಅದರ ಬಗ್ಗೆ ನಮಗೆ ಗೊಂದಲಪೂರ್ಣ ಸಂಶಯಗಳಿವೆ.”
Kannada Translation - Hamza Buturಅವರ ಸಂದೇಶವಾಹಕರುಗಳು ಕೇಳಿದರು: “ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಅಲ್ಲಾಹನ ಬಗ್ಗೆ ನಿಮಗೆ ಸಂಶಯವೇ? ನಿಮ್ಮ ಪಾಪಗಳನ್ನು ಕ್ಷಮಿಸಲು ಮತ್ತು ಒಂದು ನಿಗದಿತ ಅವಧಿಯ ತನಕ ನಿಮಗೆ ಕಾಲಾವಕಾಶ ನೀಡಲು ಅವನು ನಿಮ್ಮನ್ನು ಕರೆಯುತ್ತಿದ್ದಾನೆ.” ಅವರು ಹೇಳಿದರು: “ನೀವು ನಮ್ಮಂತಿರುವ ಮನುಷ್ಯರೇ ಆಗಿದ್ದೀರಿ. ನಮ್ಮ ಪೂರ್ವಜರು ಯಾರನ್ನು ಆರಾಧಿಸುತ್ತಿದ್ದರೋ ಅವರಿಂದ ನಮ್ಮನ್ನು ತಡೆಯುವುದೇ ನಿಮ್ಮ ಉದ್ದೇಶವಾಗಿದೆ. ನಮಗೆ ಸ್ಪಷ್ಟ ಸಾಕ್ಷ್ಯಾಧಾರವನ್ನು ತಂದು ತೋರಿಸಿ.”
Kannada Translation - Hamza Buturಅವರ ಸಂದೇಶವಾಹಕರುಗಳು ಕೇಳಿದರು: “ನಾವು ನಿಮ್ಮಂತಿರುವ ಮನುಷ್ಯರೇ ಆಗಿದ್ದೇವೆ. ಆದರೆ ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರನ್ನು ಆಶೀರ್ವದಿಸುತ್ತಾನೆ. ಅಲ್ಲಾಹನ ಅನುಮತಿಯಿಲ್ಲದೆ ಯಾವುದೇ ಸಾಕ್ಷ್ಯಾಧಾರವನ್ನು ತರಲು ನಮಗೆ ಸಾಧ್ಯವಿಲ್ಲ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
Kannada Translation - Hamza Buturಅಲ್ಲಾಹು ನಮಗೆ ನಮ್ಮ ಮಾರ್ಗಗಳನ್ನು ಸ್ಪಷ್ಟವಾಗಿ ತೋರಿಸಿರುವಾಗ ಅವನಲ್ಲಿ ಭರವಸೆಯಿಡದಿರಲು ನಮಗೇನು ಹಕ್ಕಿದೆ? ನೀವು ನೀಡುವ ಕಿರುಕುಳಗಳನ್ನು ನಾವು ಖಂಡಿತ ಸಹಿಸಿಕೊಳ್ಳುತ್ತೇವೆ. ಭರವಸೆಯಿಡುವವರು ಅಲ್ಲಾಹನಲ್ಲಿಯೇ ಭರವಸೆಯಿಡಲಿ.”
Kannada Translation - Hamza Buturಸತ್ಯನಿಷೇಧಿಗಳು ಅವರ ಸಂದೇಶವಾಹಕರುಗಳೊಡನೆ ಹೇಳಿದರು: “ನಾವು ನಿಮ್ಮನ್ನು ನಮ್ಮ ಊರಿನಿಂದ ಖಂಡಿತ ಓಡಿಸುತ್ತೇವೆ. ಅಥವಾ ನೀವು ನಮ್ಮ ಧರ್ಮಕ್ಕೆ ಮರಳಿ ಬರಲೇಬೇಕು. ಆಗ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ದೇವವಾಣಿಯನ್ನು ನೀಡಿದನು: “ಆ ಅಕ್ರಮಿಗಳನ್ನು ನಾವು ಖಂಡಿತ ಸರ್ವನಾಶ ಮಾಡುತ್ತೇವೆ.
Kannada Translation - Hamza Buturಅವರ ಬಳಿಕ ನಾವು ನಿಮ್ಮನ್ನು ಭೂಮಿಯಲ್ಲಿ ವಾಸ ಮಾಡಿಸುತ್ತೇವೆ. ಇದು ನನ್ನ ಮುಂದೆ ನಿಲ್ಲುವುದನ್ನು ಭಯಪಡುವವರಿಗೆ ಮತ್ತು ನನ್ನ ಎಚ್ಚರಿಕೆಗಳನ್ನು ಭಯಪಡುವವರಿಗಾಗಿದೆ.”
Kannada Translation - Hamza Buturಅವನು ಅದನ್ನು ಅತೀವ ತ್ರಾಸದಿಂದ ಗುಟುಕರಿಸುವನು. ಆದರೂ ಅದನ್ನು ಗಂಟಲ ಕೆಳಗಿಳಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಸಾವು ಎಲ್ಲಾ ಕಡೆಗಳಿಂದಲೂ ಅವನ ಬಳಿಗೆ ಬರುವುದು. ಆದರೂ ಅವನು ಸಾಯುವುದಿಲ್ಲ. ಅವನಿಗೆ ಅದರ ಹಿಂದೆಯೇ ಅತಿಕಠೋರ ಶಿಕ್ಷೆಯೂ ಇದೆ.
Kannada Translation - Hamza Buturತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದವರು ಯಾರೋ—ಅವರ ಕರ್ಮಗಳ ಉದಾಹರಣೆಯು ಬೂದಿಯಂತೆ. ಬಿರುಗಾಳಿಯ ದಿನ ಅದಕ್ಕೆ ಬಲವಾದ ಗಾಳಿ ಬೀಸಿತು. ಅವರು ಮಾಡಿದ ಕರ್ಮಗಳಲ್ಲಿ ಯಾವುದರ ಮೇಲೂ (ಅದನ್ನು ಹಿಡಿದಿಟ್ಟುಕೊಳ್ಳಲು) ಅವರಿಗೆ ಸಾಮರ್ಥ್ಯವಿಲ್ಲ. ಅತಿವಿದೂರವಾದ ದುರ್ಮಾರ್ಗವೆಂದರೆ ಇದೇ.[1]
Kannada Translation - Hamza Buturಅಲ್ಲಾಹು ಭೂಮ್ಯಾಕಾಶಗಳನ್ನು ಅತ್ಯಂತ ನಿಖರವಾಗಿ ಸೃಷ್ಟಿಸಿದ್ದಾನೆಂದು ನೀವು ನೋಡಿಲ್ಲವೇ? ಅವನು ಇಚ್ಛಿಸಿದರೆ ಅವನು ನಿಮ್ಮನ್ನು ತೊಲಗಿಸಿ ಹೊಸ ಸೃಷ್ಟಿಯನ್ನು ತರುವನು.
Kannada Translation - Hamza Buturಅವರೆಲ್ಲರೂ ಅಲ್ಲಾಹನ ಬಳಿಗೆ ಹೊರಟು ಬರುವರು. ಆಗ ಬಲಹೀನರು ಅಹಂಕಾರಿಗಳೊಂದಿಗೆ ಹೇಳುವರು: “ನಾವು ನಿಜಕ್ಕೂ ನಿಮ್ಮ ಹಿಂಬಾಲಕರಾಗಿದ್ದೆವು. ಈಗ ಅಲ್ಲಾಹನ ಶಿಕ್ಷೆಯಿಂದ ಒಂದಂಶವನ್ನಾದರೂ ನಮ್ಮಿಂದ ದೂರ ಮಾಡುವಿರಾ?” ಅವರು ಉತ್ತರಿಸುವರು: “ಅಲ್ಲಾಹು ನಮಗೆ ಸನ್ಮಾರ್ಗ ತೋರಿಸುತ್ತಿದ್ದರೆ ನಾವು ನಿಮಗೂ ಸನ್ಮಾರ್ಗ ತೋರಿಸುತ್ತಿದ್ದೆವು. ಈಗ ನಾವು ಸಹನೆ ಕಳೆದುಕೊಂಡರೂ ಸಹನೆಯಿಂದ ವರ್ತಿಸಿದರೂ ಯಾವುದೇ ವ್ಯತ್ಯಾಸವಿಲ್ಲ. ನಮಗೆ ಯಾವುದೇ ರಕ್ಷಾಮಾರ್ಗವಿಲ್ಲ.”
Kannada Translation - Hamza Buturವಿಷಯವನ್ನು ತೀರ್ಮಾನಿಸಲಾದಾಗ ಶೈತಾನನು ಹೇಳುವನು: “ನಿಜಕ್ಕೂ ಅಲ್ಲಾಹು ನಿಮಗೆ ಮಾಡಿದ ವಾಗ್ದಾನವು ಸತ್ಯವಾಗಿತ್ತು. ನಾನೂ ನಿಮಗೆ ವಾಗ್ದಾನ ಮಾಡಿದ್ದೆ. ಆದರೆ ನಾನು ನನ್ನ ವಾಗ್ದಾನವನ್ನು ಉಲ್ಲಂಘಿಸಿದ್ದೇನೆ. ನನಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ನಾನು ನಿಮ್ಮನ್ನು ಕರೆದಾಗ ನೀವು ನನ್ನ ಹಿಂದೆ ಓಡಿ ಬಂದಿರಿ. ಆದ್ದರಿಂದ ನನ್ನ ಮೇಲೆ ಅಪವಾದ ಹೊರಿಸಬೇಡಿ. ನಿಮ್ಮ ಮೇಲೆಯೇ ಅಪವಾದ ಹೊರಿಸಿರಿ. ನನ್ನನ್ನು ಸಹಾಯಕ್ಕಾಗಿ ಕೂಗಬೇಡಿ. ನಾನು ನಿಮ್ಮನ್ನು ಸಹಾಯಕ್ಕಾಗಿ ಕೂಗುವುದಿಲ್ಲ. ನೀವು ಇದಕ್ಕೆ ಮೊದಲು ನನ್ನನ್ನು ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ಮಾಡಿದ್ದನ್ನು ನಾನು ನಿಷೇಧಿಸಿದ್ದೇನೆ. ನಿಶ್ಚಯವಾಗಿಯೂ, ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿದೆ.”
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸಲಾಗುವುದು. ಅವರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಿಂದ ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಿ ಅವರ ಅಭಿವಂದನೆಯು ಸಲಾಂ (ಶಾಂತಿ) ಎಂದಾಗಿರುವುದು.
Kannada Translation - Hamza Buturಅಲ್ಲಾಹು ಪರಿಶುದ್ಧ ವಚನಕ್ಕೆ[1] ಯಾವ ರೀತಿಯಲ್ಲಿ ಉದಾಹರಣೆ ನೀಡಿದ್ದಾನೆಂದು ನೀವು ನೋಡಿಲ್ಲವೇ? ಅದೊಂದು ಪರಿಶುದ್ಧ ಮರದಂತೆ. ಅದರ ಬೇರುಗಳು ಭದ್ರವಾಗಿವೆ ಮತ್ತು ರೆಂಭೆಗಳು ಆಕಾಶದಲ್ಲಿವೆ.
Kannada Translation - Hamza Buturಅದರ ಪರಿಪಾಲಕನ (ಅಲ್ಲಾಹನ) ಅಪ್ಪಣೆಯಿಂದ ಅದು ಎಲ್ಲ ಕಾಲಗಳಲ್ಲೂ ಫಲ ನೀಡುತ್ತದೆ. ಅಲ್ಲಾಹು ಜನರಿಗೆ ಉದಾಹರಣೆಗಳನ್ನು ವಿವರಿಸುತ್ತಾನೆ. ಅವರು ಉಪದೇಶ ಪಡೆಯುವುದಕ್ಕಾಗಿ.
Kannada Translation - Hamza Buturಅಲ್ಲಾಹು ಸತ್ಯವಿಶ್ವಾಸಿಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸದೃಢ ವಚನದ ಮೂಲಕ ದೃಢವಾಗಿ ನಿಲ್ಲಿಸುತ್ತಾನೆ.[1] ಅಕ್ರಮವೆಸಗಿದವರನ್ನು ಅಲ್ಲಾಹು ದಾರಿತಪ್ಪಿಸುತ್ತಾನೆ. ಅಲ್ಲಾಹು ಅವನು ಇಚ್ಛಿಸಿದ್ದನ್ನು ಮಾಡುತ್ತಾನೆ.
Kannada Translation - Hamza Buturಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುವುದಕ್ಕಾಗಿ ಅವರು ಅಲ್ಲಾಹನಿಗೆ ಕೆಲವು ಸರಿಸಾಟಿಗಳನ್ನು ಮಾಡಿದರು. ಹೇಳಿರಿ: “ನೀವು ಆನಂದಿಸಿರಿ. ಕೊನೆಗೆ ನಿಮ್ಮ ಮರಳುವಿಕೆಯು ನರಕಕ್ಕೇ ಆಗಿದೆ.”
Kannada Translation - Hamza Buturನನ್ನ ಸತ್ಯವಿಶ್ವಾಸಿ ದಾಸರೊಡನೆ—ಅವರು ನಮಾಝ್ ಸಂಸ್ಥಾಪಿಸಲಿ ಮತ್ತು ಯಾವುದೇ ಕ್ರಯ-ವಿಕ್ರಯ ಅಥವಾ ಗೆಳೆತನವು ಉಪಕಾರ ಮಾಡದ ದಿನವು ಆಗಮಿಸುವ ಮೊದಲೇ ನಾವು ಅವರಿಗೆ ಒದಗಿಸಿದ ಧನದಿಂದ ರಹಸ್ಯವಾಗಿ ಮತ್ತು ಬಹಿರಂಗವಾಗಿ ಖರ್ಚು ಮಾಡಲಿ ಎಂದು ಹೇಳಿರಿ.
Kannada Translation - Hamza Buturಅಲ್ಲಾಹನೇ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನು. ಅವನು ಆಕಾಶದಿಂದ ಮಳೆಯನ್ನು ಸುರಿಸಿದನು. ನಂತರ ಅದರಿಂದ ನಿಮ್ಮ ಉಪಜೀವನಕ್ಕಾಗಿ ಹಣ್ಣುಗಳನ್ನು ಉತ್ಪಾದಿಸಿದನು. ಕಡಲಲ್ಲಿ ಅವನ ಆಜ್ಞೆಯಂತೆ ಚಲಿಸಲು ಅವನು ನಿಮಗೆ ನಾವೆಯನ್ನು ನಿಯಂತ್ರಿಸಿಕೊಟ್ಟನು. ಅವನು ನದಿಗಳನ್ನು ಕೂಡ ನಿಮ್ಮ ನಿಯಂತ್ರಣಕ್ಕೆ ನೀಡಿದನು.
Kannada Translation - Hamza Buturನಿರಂತರವಾಗಿ ಚಲಿಸುವ ರೀತಿಯಲ್ಲಿ ಸೂರ್ಯ-ಚಂದ್ರರನ್ನು ಅವನು ನಿಮಗೆ ನಿಯಂತ್ರಿಸಿಕೊಟ್ಟನು. ರಾತ್ರಿ-ಹಗಲಗಳನ್ನು ಕೂಡ ಅವನು ನಿಮಗೆ ನಿಯಂತ್ರಿಸಿಕೊಟ್ಟನು.
Kannada Translation - Hamza Buturನೀವು ಅವನೊಂದಿಗೆ ಕೇಳಿದ್ದೆಲ್ಲವನ್ನೂ ಅವನು ನಿಮಗೆ ನೀಡಿದನು. ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಸತೊಡಗಿದರೆ ಅವುಗಳನ್ನು ಲೆಕ್ಕ ಮಾಡಲು ನಿಮಗೆ ಸಾಧ್ಯವಿಲ್ಲ. ಮನುಷ್ಯನು ನಿಜಕ್ಕೂ ಕಡು ಅಕ್ರಮಿ ಮತ್ತು ಕೃತಘ್ನನಾಗಿದ್ದಾನೆ.
Kannada Translation - Hamza Buturಇಬ್ರಾಹೀಮ್ ಪ್ರಾರ್ಥಿಸಿದ ಸಂದರ್ಭ(ವನ್ನು ಸ್ಮರಿಸಿ): “ಓ ನನ್ನ ಪರಿಪಾಲಕನೇ! ಈ ನಗರವನ್ನು (ಮಕ್ಕಾ) ನಿರ್ಭಯವಾಗಿ ಮಾಡು ಮತ್ತು ನನ್ನನ್ನು ಹಾಗೂ ನನ್ನ ಮಕ್ಕಳನ್ನು ವಿಗ್ರಹಾರಾಧನೆ ಮಾಡುವುದರಿಂದ ದೂರವಿರಿಸು.
Kannada Translation - Hamza Buturಓ ನನ್ನ ಪರಿಪಾಲಕನೇ! ನಿಶ್ಚಯವಾಗಿಯೂ, ಅವು ಜನರಲ್ಲಿ ಹೆಚ್ಚಿನವರನ್ನು ದಾರಿತಪ್ಪಿಸಿವೆ. ಆದ್ದರಿಂದ ಯಾರು ನನ್ನನ್ನು ಹಿಂಬಾಲಿಸುತ್ತಾನೋ ಅವನು ನನ್ನವನು. ಯಾರು ನನಗೆ ಅವಿಧೇಯತೆ ತೋರುತ್ತಾನೋ—ನಿಶ್ಚಯವಾಗಿಯೂ ನೀನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿರುವೆ.
Kannada Translation - Hamza Buturಓ ನಮ್ಮ ಪರಿಪಾಲಕನೇ! ನಾನು ನನ್ನ ಮಕ್ಕಳಲ್ಲಿ ಕೆಲವರನ್ನು ಹೊಲಗಳಿಲ್ಲದ ಈ ಕಣಿವೆಯಲ್ಲಿ ನಿನ್ನ ಪವಿತ್ರ ಭವನದ ಬಳಿ ವಾಸ ಮಾಡಿಸಿದ್ದೇನೆ. ಓ ನಮ್ಮ ಪರಿಪಾಲಕನೇ! ಅವರು ನಮಾಝ್ ಸಂಸ್ಥಾಪಿಸುವುದಕ್ಕಾಗಿ. ಆದ್ದರಿಂದ ಜನರಲ್ಲಿ ಕೆಲವರ ಹೃದಯಗಳು ಅವರ ಕಡೆಗೆ ಒಲಿಯುವಂತೆ ಮಾಡು. ಅವರ ಉಪಜೀವನಕ್ಕಾಗಿ ಹಣ್ಣು-ಹಂಪಲುಗಳನ್ನು ನೀಡು. ಅವರು ಕೃತಜ್ಞರಾಗಲೂಬಹುದು.[1]
Kannada Translation - Hamza Buturಓ ನಮ್ಮ ಪರಿಪಾಲಕನೇ! ನಾವು ಬಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ನೀನು ತಿಳಿಯುವೆ. ಭೂಮಿಯಲ್ಲಿ ಅಥವಾ ಆಕಾಶದಲ್ಲಿರುವ ಯಾವುದೇ ವಸ್ತು ಅಲ್ಲಾಹನಿಂದ ಮರೆಯಾಗಿಲ್ಲ.
Kannada Translation - Hamza Buturಇಳಿ ವಯಸ್ಸಿನಲ್ಲಿ ನನಗೆ ಇಸ್ಮಾಈಲ್ ಮತ್ತು ಇಸ್ಹಾಕರನ್ನು ದಯಪಾಲಿಸಿದ ಅಲ್ಲಾಹನಿಗೆ ಸರ್ವಸ್ತುತಿ. ನನ್ನ ಪರಿಪಾಲಕನು ನಿಜಕ್ಕೂ ಪ್ರಾರ್ಥನೆಗಳನ್ನು ಕೇಳುತ್ತಾನೆ.
Kannada Translation - Hamza Buturಓ ನನ್ನ ಪರಿಪಾಲಕನೇ! ನನ್ನನ್ನು ನಮಾಝ್ ಸಂಸ್ಥಾಪಿಸುವವನನ್ನಾಗಿ ಮಾಡು. ನನ್ನ ಸಂತಾನದಲ್ಲೂ ಕೂಡ. ಓ ನಮ್ಮ ಪರಿಪಾಲಕನೇ! ನನ್ನ ಪ್ರಾರ್ಥನೆಯನ್ನು ಸ್ವೀಕರಿಸು.
Kannada Translation - Hamza Buturಅಕ್ರಮಿಗಳು ಮಾಡುವ ದುಷ್ಕರ್ಮಗಳನ್ನು ಅಲ್ಲಾಹು ಗಮನಿಸುತ್ತಿಲ್ಲ ಎಂದು ನೀವು ಎಂದಿಗೂ ಭಾವಿಸಬೇಡಿ. ಅವನು ಅವರ ವಿಚಾರಣೆಯನ್ನು ವಿಳಂಬ ಮಾಡುವುದು ಕಣ್ಣುಗಳು ಭಯದಿಂದ ದುರುಗುಟ್ಟಿ ನೋಡುವ ದಿನದವರೆಗೆ ಮಾತ್ರ.
Kannada Translation - Hamza Buturಜನರಿಗೆ ಶಿಕ್ಷೆಯು ಬರುವ ದಿನದ ಬಗ್ಗೆ ಎಚ್ಚರಿಕೆ ನೀಡಿರಿ. ಆಗ ಅಕ್ರಮವೆಸಗಿದವರು ಹೇಳುವರು: “ಓ ನಮ್ಮ ಪರಿಪಾಲಕನೇ! ಸಮೀಪದ ಒಂದು ಅವಧಿಯವರೆಗೆ ನಮಗೆ ಕಾಲಾವಕಾಶ ನೀಡು. ನಾವು ನಿನ್ನ ಕರೆಗೆ ಉತ್ತರಿಸುತ್ತೇವೆ ಮತ್ತು ಸಂದೇಶವಾಹಕರುಗಳನ್ನು ಅನುಸರಿಸುತ್ತೇವೆ.” (ಆಗ ಅವರೊಡನೆ ಹೇಳಲಾಗುವುದು): “ನೀವು ಇಹಲೋಕದಿಂದ (ಪರಲೋಕಕ್ಕೆ) ತೆರಳುವುದೇ ಇಲ್ಲವೆಂದು ಇದಕ್ಕೆ ಮೊದಲು ನೀವು ಆಣೆ ಮಾಡಿ ಹೇಳುತ್ತಿದ್ದಿರಲ್ಲವೇ?”
Kannada Translation - Hamza Buturಸ್ವಯಂ ಅಕ್ರಮವೆಸಗಿದವರ ವಾಸಸ್ಥಳಗಳಲ್ಲೇ ನೀವೂ ವಾಸವಾಗಿದ್ದಿರಿ. ಅವರೊಡನೆ ನಾವು ಹೇಗೆ ವರ್ತಿಸಿದೆವೆಂದು ನಿಮಗೆ ಸ್ಪಷ್ಟವಾಗಿ ತಿಳಿದಿತ್ತು. ನಾವು ನಿಮಗೆ ಉದಾಹರಣೆಗಳನ್ನೂ ನೀಡಿದ್ದೆವು.
Kannada Translation - Hamza Buturಅವರು ತಮ್ಮ ತಂತ್ರಗಳನ್ನು ಪ್ರಯೋಗಿಸುತ್ತಿದ್ದರು. ಅವರ ಎಲ್ಲಾ ತಂತ್ರಗಳ ಬಗ್ಗೆ ಅಲ್ಲಾಹನಿಗೆ ತಿಳಿದಿದೆ. ಅವರ ತಂತ್ರಗಳಿಗೆ ಪರ್ವತಗಳನ್ನು ಅವುಗಳ ಸ್ಥಳದಿಂದ ಚಲಿಸುವಂತೆ ಮಾಡುವ ಶಕ್ತಿಯೇನೂ ಇಲ್ಲ.
Kannada Translation - Hamza Buturಅಲ್ಲಾಹು ತನ್ನ ಸಂದೇಶವಾಹಕರುಗಳಿಗೆ ನೀಡಿದ ವಾಗ್ದಾನವನ್ನು ಉಲ್ಲಂಘಿಸುತ್ತಾನೆಂದು ನೀವು ಎಂದಿಗೂ ಭಾವಿಸಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ.
Kannada Translation - Hamza Buturಭೂಮಿಯು ಈ ಭೂಮಿಯಲ್ಲದ ಬೇರೆಯಾಗಿ ಮತ್ತು ಅದರಂತೆ ಆಕಾಶಗಳು ಕೂಡ ಬದಲಾಗುವ ಹಾಗೂ ಮನುಷ್ಯರೆಲ್ಲರೂ ಏಕೈಕನು ಮತ್ತು ಮಹಾ ಶಕ್ತಿಶಾಲಿಯಾದ ಅಲ್ಲಾಹನ ಮುಂಭಾಗಕ್ಕೆ ಬರುವ ದಿನ.
Kannada Translation - Hamza Buturಅಲ್ಲಾಹು ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡುವುದಕ್ಕಾಗಿ. ನಿಶ್ಚಯವಾಗಿಯೂ, ಅಲ್ಲಾಹು ಅತಿಶೀಘ್ರವಾಗಿ ವಿಚಾರಣೆ ಮಾಡುವವನಾಗಿದ್ದಾನೆ.
Kannada Translation - Hamza Buturಈ ಕುರ್ಆನ್ ಸಂಪೂರ್ಣ ಮನುಕುಲಕ್ಕೆ ಒಂದು ಸೂಚನಾಪತ್ರವಾಗಿದೆ. ಇದರ ಮೂಲಕ ಅವರಿಗೆ ಎಚ್ಚರಿಕೆ ನೀಡುವುದಕ್ಕಾಗಿ, ಏಕೈಕ ದೇವನು ಅಲ್ಲಾಹು ಮಾತ್ರವೆಂದು ಅವರು ತಿಳಿಯುವುದಕ್ಕಾಗಿ ಮತ್ತು ಬುದ್ಧಿವಂತರು ಉಪದೇಶ ಸ್ವೀಕರಿಸುವುದಕ್ಕಾಗಿ.