إِلَيْهِ يُرَدُّ عِلْمُ ٱلسَّاعَةِ وَمَا تَخْرُجُ مِن ثَمَرَٰتٍ مِّنْ أَكْمَامِهَا وَمَا تَحْمِلُ مِنْ أُنثَىٰ وَلَا تَضَعُ إِلَّا بِعِلْمِهِۦ وَيَوْمَ يُنَادِيهِمْ أَيْنَ شُرَكَآءِى قَالُوٓا۟ ءَاذَنَّٰكَ مَا مِنَّا مِن شَهِيدٍ
Kannada Translation - Hamza Buturಅಂತ್ಯಸಮಯದ ಕುರಿತಾದ ಜ್ಞಾನವನ್ನು ಅಲ್ಲಾಹನಿಗೆ ಮರಳಿಸಲಾಗುತ್ತದೆ. ಅವನ ತಿಳುವಳಿಕೆಯಿಲ್ಲದೆ ಯಾವುದೇ ಹಣ್ಣು ಅದರ ತೊಗಲಿನಿಂದ ಹೊರಹೊಮ್ಮುವುದಿಲ್ಲ. (ಅವನ ತಿಳುವಳಿಕೆಯಿಲ್ಲದೆ) ಯಾವುದೇ ಸ್ತ್ರೀ ಗರ್ಭ ಧರಿಸುವುದೋ ಹಡೆಯುವುದೋ ಇಲ್ಲ. “ನನ್ನ ಸಹಭಾಗಿಗಳು ಎಲ್ಲಿ?” ಎಂದು ಅವನು ಅವರನ್ನು ಕರೆದು ಕೇಳುವ ದಿನ! ಅವರು ಉತ್ತರಿಸುವರು: “ನಮ್ಮಲ್ಲಿ ಯಾರೂ ಅದಕ್ಕೆ ಸಾಕ್ಷಿಗಳಲ್ಲ ಎಂದು ನಾವು ನಿನಗೆ ತಿಳಿಸುತ್ತಿದ್ದೇವೆ.”