فَإِذَا لَقِيتُمُ ٱلَّذِينَ كَفَرُوا۟ فَضَرْبَ ٱلرِّقَابِ حَتَّىٰٓ إِذَآ أَثْخَنتُمُوهُمْ فَشُدُّوا۟ ٱلْوَثَاقَ فَإِمَّا مَنًّۢا بَعْدُ وَإِمَّا فِدَآءً حَتَّىٰ تَضَعَ ٱلْحَرْبُ أَوْزَارَهَا ذَٰلِكَ وَلَوْ يَشَآءُ ٱللَّهُ لَٱنتَصَرَ مِنْهُمْ وَلَٰكِن لِّيَبْلُوَا۟ بَعْضَكُم بِبَعْضٍ وَٱلَّذِينَ قُتِلُوا۟ فِى سَبِيلِ ٱللَّهِ فَلَن يُضِلَّ أَعْمَٰلَهُمْ
Kannada Translation - Hamza Buturನೀವು ಸತ್ಯನಿಷೇಧಿಗಳೊಡನೆ (ಯುದ್ಧದಲ್ಲಿ) ಮುಖಾಮುಖಿಯಾದರೆ ಅವರ ಕತ್ತುಗಳ ಮೇಲೆ ಬೀಸಿರಿ. ಅವರನ್ನು ಚೆನ್ನಾಗಿ ಬಗ್ಗುಬಡಿದ ನಂತರ ಅವರನ್ನು ಬಿಗಿಯಾಗಿ ಬಂಧಿಸಿರಿ. ನಂತರ ಒಂದೋ ಅವರೊಡನೆ ದಾಕ್ಷಿಣ್ಯ ತೋರಿರಿ[1] ಅಥವಾ ವಿಮೋಚನಾ ಶುಲ್ಕವನ್ನು ಪಡೆದು ಅವರನ್ನು ಸ್ವತಂತ್ರಗೊಳಿಸಿರಿ—ಯುದ್ಧವು ಅದರ ಭಾರವನ್ನು ಕಳಚುವ ತನಕ.[2] ಇದೇ ನಿಯಮ. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನೇ ಅವರಿಂದ ಪ್ರತೀಕಾರ ಪಡೆಯುತ್ತಿದ್ದನು. ಆದರೆ ಇದು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರ ಮೂಲಕ ಪರೀಕ್ಷಿಸುವುದಕ್ಕಾಗಿದೆ. ಯಾರು ಅಲ್ಲಾಹನ ಮಾರ್ಗದಲ್ಲಿ ಹತರಾಗುತ್ತಾರೋ ಅವರ ಕರ್ಮಗಳನ್ನು ಅವನು ಎಂದಿಗೂ ನಿಷ್ಫಲಗೊಳಿಸುವುದಿಲ್ಲ.