إِنَّ ٱللَّهَ ٱشْتَرَىٰ مِنَ ٱلْمُؤْمِنِينَ أَنفُسَهُمْ وَأَمْوَٰلَهُم بِأَنَّ لَهُمُ ٱلْجَنَّةَ يُقَٰتِلُونَ فِى سَبِيلِ ٱللَّهِ فَيَقْتُلُونَ وَيُقْتَلُونَ وَعْدًا عَلَيْهِ حَقًّا فِى ٱلتَّوْرَىٰةِ وَٱلْإِنجِيلِ وَٱلْقُرْءَانِ وَمَنْ أَوْفَىٰ بِعَهْدِهِۦ مِنَ ٱللَّهِ فَٱسْتَبْشِرُوا۟ بِبَيْعِكُمُ ٱلَّذِى بَايَعْتُم بِهِۦ وَذَٰلِكَ هُوَ ٱلْفَوْزُ ٱلْعَظِيمُ
Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳಿಂದ, ಅವರಿಗೆ ಸ್ವರ್ಗವನ್ನು ನೀಡುವೆನು ಎಂಬುದಕ್ಕೆ ಬದಲಿಯಾಗಿ, ಅವರ ತನು-ಧನಗಳನ್ನು ಖರೀದಿಸಿದ್ದಾನೆ. ಅವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾ (ವೈರಿಗಳನ್ನು) ಕೊಲ್ಲುತ್ತಾರೆ ಮತ್ತು (ವೈರಿಗಳಿಂದ) ಕೊಲೆಗೀಡಾಗುತ್ತಾರೆ. ಇದು ತೌರಾತ್ನಲ್ಲಿ, ಇಂಜೀಲ್ನಲ್ಲಿ ಮತ್ತು ಕುರ್ಆನ್ನಲ್ಲಿ ಅಲ್ಲಾಹು ನೀಡಿದ ಸತ್ಯ ವಾಗ್ದಾನವಾಗಿದೆ. ಅಲ್ಲಾಹನಿಗಿಂತಲೂ ಹೆಚ್ಚು ತನ್ನ ಕರಾರನ್ನು ಪೂರ್ತಿ ಮಾಡುವವನು ಯಾರು? ಆದ್ದರಿಂದ ನೀವು ಮಾಡಿರುವ ಈ ವ್ಯವಹಾರದಲ್ಲಿ ಸಂತೋಷಪಡಿರಿ. ಅದೇ ಅತಿದೊಡ್ಡ ಯಶಸ್ಸು.